ಬಿಸಿಲ ನಾಡಿನ ಬೆಂಕಿ ಕಥೆ: ಯಾದಗಿರಿಯ ಬೇಸಿಗೆಯ ಭಯಾನಕತೆ ! ನೀರಿಲ್ಲ, ಕರೆಂಟ್ ಇಲ್ಲ, ಪ್ಲಾನ್ ಅಂತೂ ಮೊದಲೇ ಇಲ್ಲ
ನಮಸ್ಕಾರ ಕನ್ನಡಿಗರೇ. ನಾನು ನಿಮ್ಮ “ದ ವಾಯ್ಸ್ ಆಫ್ ಕನ್ನಡಿಗ”. ವೀಕೆಂಡ್ (Weekend) ಬಂತು ಅಂದ್ರೆ ಸಾಕು, ನಮ್ಮ ಬೆಂಗಳೂರಿನ ಐಟಿ (IT) ಮಂದಿಗೆಲ್ಲ ಎಲ್ಲಿಗೆ ಟ್ರಿಪ್ ಹೋಗೋಣ, ಯಾವ ಪಬ್ಗೆ ಹೋಗೋಣ ಅನ್ನೋ ಪ್ಲಾನ್ಗಳು ಶುರುವಾಗುತ್ತವೆ. ಆಫೀಸ್ನಲ್ಲಿ ಎಸಿ (AC) ಆನ್ ಮಾಡ್ಕೊಂಡು, ಲೇ-ಆಫ್ (Layoff), ಎಚ್ಆರ್ (HR) ಪಾಲಿಸಿ, ಹೆಚ್ಒನ್-ಬಿ (H1-B) ವೀಸಾ ಅಂತ ನಾವೆಲ್ಲ ಬ್ಯುಸಿಯಾಗಿರ್ತೀವಿ. ಆದ್ರೆ, ನಾವು ಯಾವತ್ತಾದ್ರೂ ಸಿಲ್ಕ್ ಬೋರ್ಡ್ ಟ್ರಾಫಿಕ್ (Traffic) ದಾಟಿ, ನಮ್ಮದೇ ರಾಜ್ಯದ ಕಲ್ಯಾಣ ಕರ್ನಾಟಕದ
